`೧೯೪೪` ಚಿತ್ರಕ್ಕೆ ಕ್ಲೈಮ್ಯಾಕ್ಸ್ ಚಿತ್ರೀಕರಣ
Posted date: 23 Sat, May 2015 – 08:33:52 AM

ಜೈಭಾರತಾಂಭ ಮೂವೀ ಮೇಕರ‍್ಸ್ ಲಾಂಛನದಲ್ಲಿ ಪರಮೇಶ್ ಕೆ.ಆರ್.ಪೇಟೆ ಅವರು ನಿರ್ಮಿಸುತ್ತಿರುವ, ‘೧೯೪೪ ಚಿತ್ರಕ್ಕೆ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮೂರು ದಿನಗಳ ಕಾಲ ತಾವರೆಕೆರೆಯ ಭೂತಬಂಗಲೆಯಲ್ಲಿ ನಡೆದಿದೆ. ನವೀನ್‌ಕೃಷ್ಣ, ಸುಚೇಂದ್ರಪ್ರಸಾದ್, ಶೃತಿ, ವೀರೇಶ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಬದ್ರಿನಾಥ್ ಈ ಚಿತ್ರಕ್ಕೆ ಛಾಯಾಗ್ರಹಣದೊಂದಿಗೆ ನಿರ್ದೇಶನವನ್ನು ಮಾಡಿದ್ದಾರೆ. ರಾಜೇಶ್‌ರಾಮನಾಥ್ ಸಂಗೀತ ನಿರ್ದೇಶನ, ಜ಼್ಞಾನೇಶ್ ಸಂಕಲನ, ಸುರೇಶ್ ನೃತ್ಯ ನಿರ್ದೇಶನ ಹಾಗೂ ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ನವೀನ್‌ಕೃಷ್ಣ, ಶೃತಿ, ಭವ್ಯ, ಶಿವಾನಿ ಸುಚೇಂದ್ರಪ್ರಸಾದ್, ಧೀರಜ್‌ಸೂರ್ಯ, ಕಾಜುವಾಲಿ, ವೀರೇಶ್ ಬೆಳಕವಾಡಿ ಮುಂತಾದವರಿದ್ದಾರೆ. ಈ ಚಿತ್ರ ಎನ್.ಎಸ್.ರಾವ್ ಅವರ ‘ರೊಟ್ಟಿಋಣ ನಾಟಕವನ್ನಾಧರಿಸಿದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed